ಜೂನ್ 26, 2021

ಹುತಾತ್ಮ ಸೈನಿಕ ತಂದೆಯ ತ್ಯಾಗ

ಈ ದೇಶಕ್ಕಾಗಿ ನಮ್ಮ ಬದುಕು. ಎಲ್ಲದಕ್ಕೂ ಸಿದ್ಧರಾಗಿರಬೇಕು ಎಂಬ ಮಾತಿಗೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಸಾಕ್ಷಿಯಾಗಿದ್ದಾರೆ.

ಅವರ ಮಗ 2ನೇ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ. 23 ಪಂಜಾಬ್ ಎಸ್ಸಿಯಲ್ಲಿ ಕಾರ್ಯನಿರ್ವಹಿಸಿದವರು.

1996ರಲ್ಲಿ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ ಜಮ್ಮು ಕಾಶ್ಮೀರದಲ್ಲಿ ವೈರಿಗಳೊಂದಿಗಿನ ಹೋರಾಟದಲ್ಲಿ ಹುತಾತ್ಮರಾಗುತ್ತಾರೆ.

ಅವರ ತಂದೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರೂ ಕೂಡಾ ಸೇನೆಯಲ್ಲಿದ್ದವರು. ಕಮಾಂಡಿಂಗ್ ಆಫೀಸರ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರಿಗೆ ದೇವರು ಈಗ ತನ್ನ ಮಗ ಮತ್ತು ತನ್ನ ಮಡದಿಯನ್ನು ಕಳೆದುಕೊಂಡ ದುಃಖವನ್ನು ‌ಸಹಿಸುವ ಶಕ್ತಿ ಕೊಡಲಿ.

ಏಕೆಂದರೆ ೩ನೇ ಬಾರಿ ಕ್ಯಾನ್ಸರಿಂದ ಬಳಲಿ ಅವರ ಮಡದಿ ತೃಪ್ತಾ ಸಲಾರಿಯಾ ಕೂಡ ಈಗ ಇಹಲೋಕವನ್ನು ತ್ಯಜಿಸಿದ್ದಾರೆ.

ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರು ನೇತೃತ್ವ ವಹಿಸಿದ್ದ ತುಕಡಿಯಲ್ಲೇ ಮಗ ಲೆಫ್ಟಿನೆಂಟ್ ಗುರ್ದೀಪ್ ಸಿಂಗ್ ಸಲಾರಿಯಾ ಸೈನಿಕರಾಗಿ ಕಾರ್ಯನಿರ್ವಹಿಸಿದ್ದರು.


ಇತಿಹಾಸದಲ್ಲೇ ಮೊದ‌ಲ‌ ಬಾರಿಗೆ ಇರಬೇಕು ಕಮಾಂಡಿಂಗ್ ಆಫೀಸರ್ ಆಗಿ ಮಗನ ಸಾವಿನ ಸುದ್ದಿಯನ್ನು ಪತ್ನಿಗೆ ಹೇಳಬೇಕಾದ ಅನಿವಾರ್ಯತೆ‌ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಅವರದ್ದು.

ಹೇಗಾಗಿರಬಹುದು ಅವರಿಗೆ? ಮಗನ ದೇಹ ಹೊಕ್ಕ ಬುಲೆಟ್ ಅವರೇ ಹುಡುಕಾಡಿ ತೆಗೆದದ್ದು, ಅದು ಅವರ ಜೊತೆ ಭದ್ರವಾಗಿದೆ.

ಅದಾಗಿ ಪತ್ನಿಯ ‌ಸುದೀರ್ಘ ಆರೋಗ್ಯದ ಹೋರಾಟ. ಕೊನೆಗೆ ಲೆಫ್ಟಿನೆಂಟ್ ಕರ್ನಲ್ ಸಾಗರ್ ಸಲಾರಿಯ ಈಗ ಪತ್ನಿ ಮತ್ತು ಮಗನ ನೆನಪಲ್ಲಿ ಕಾಲ ಕಳೆಯುವ ಸ್ಥಿತಿ. ಎಂಥಾ ತ್ಯಾಗ ಇವರದ್ದು. ಈ ತ್ಯಾಗಕ್ಕೆ ಬೆಲೆ ಕಟ್ಟಲಾದಿತೆ ? ಅವರ ಸೇವೆ ಬಲಿದಾನ, ದೇಶಕ್ಕಾಗಿ ಮಾಡಿದ ಸಮರ್ಪಣೆ ಎಂಥದ್ದು...

ಸಲಾರಿಯ ಕುಟುಂಬಕ್ಕೆ ನಮ್ಮ ಸಲಾಂ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ