ನವೆಂಬರ್ 05, 2020

ಮಲ್ಲಿ: ಗಜಲ್ ಗಲ್ಲಿಯಲ್ಲಿ


ನನ್ನೆಲ್ಲ ಓದುಗ ಬಳಗಕ್ಕೆ ಒಂದು ಖುಷಿಯ ಸುದ್ದಿಯನ್ನು ನೀಡಲು ಬಯಸುತ್ತೇನೆ. ಕಲಬುರಗಿಯ ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿನಾಥ ಶಿ. ತಳವಾರ ಅವರು ಇಲ್ಲಿ ಪ್ರತಿ ವಾರ "ಮಲ್ಲಿ: ಗಜಲ್ ಗಲ್ಲಿಯಲ್ಲಿ" ಅಂಕಣದಲ್ಲಿ ವಾರಕ್ಕೊಂದು ಗಜಲ್ ಬರೆಯಲಿದ್ದಾರೆ.

ಡಾ. ಮಲ್ಲಿನಾಥ ಶಿ. ತಳವಾರ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರು. ಕವನ, ಕಥಾಸಂಕಲನ, ಸಂಶೋಧನಾ ಮಹಾಪ್ರಬಂಧ, ವ್ಯಕ್ತಿ ಹೊಸ ಪರಿಚಯ, ಹೀಗೆ ಹಲವು ಮೌಲ್ಯಯುತ ಕೃತಿಗಳನ್ನು ಪ್ರಕಟಿಸಿದ್ದಾರೆ. ಪತ್ರಿಕೆಗಳಲ್ಲಿ ಕಥೆ, ಕವನಗಳು, ಗಜಲ್ ಗಳು ಪ್ರಕಟವಾಗಿವೆ. ಆಕಾಶವಾಣಿಯಲ್ಲಿ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗಿವೆ. ತಾಲ್ಲೂಕು, ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗಳಲ್ಲಿ ಕವನ ವಾಚಿಸಿದ್ದಾರೆ. ಪ್ರಸ್ತುತವಾಗಿ ಚಿತ್ತಾಪುರ ತಾಲೂಕಿನ ಅಖಿಲ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತಿದ್ದಾರೆ.

ಈಗ ಡಾ. ಮಲ್ಲಿನಾಥ ಶಿ. ತಳವಾರ ಅವರು ತಮ್ಮ ಈ ಅಂಕಣದಿಂದ ನಮ್ಮೆಲ್ಲರಿಗೆ ಗಜಲ್ ಸಾಹಿತ್ಯದ ರಸದೌತಣವನ್ನು ಉಣಬಡಿಸಲಿದ್ದಾರೆ. ಕನ್ನಡ ವಾಙ್ಮಯ ಪ್ರಪಂಚದಲ್ಲಿ ಒಣ ಕೆರೆಯಾಗಿದ್ದ ಗಜಲ್ ಪ್ರಕಾರವನ್ನು ಝರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಉರ್ದು ಸೊಗಡನ್ನು ಅತ್ಯಂತ ನಾಜೂಕಾಗಿ ಕನ್ನಡದ ಮಾಧುರ್ಯದಲ್ಲಿ ಬೆರೆಸುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಓದುಗರಾಗಿ ಪ್ರೋತ್ಸಾಹಿಸುತ್ತೇವೆ ಎಂದು ಭರವಸೆ ನೀಡೋಣ ಅಲ್ಲವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ