ನವೆಂಬರ್ 06, 2020

001: ಗಜಲ್

ಸಾತ್ವಿಕತೆ ಏಕೆ ಗೆಲುವಿನ ಹೊಸ್ತಿಲಲ್ಲಿ ಎಡವುತಿದೆ 

ತಾಮಸವೇಕೆ ಸಂಭ್ರಮದ ಮಧ್ಯೆ ಹೊಳೆಯುತಿದೆ 


ಬುದ್ಧಿಯ ಫಸಲು ಕುಟೀಲತೆಯಲ್ಲಿ ಬೆಳೆಯುತಿದೆ 

ಮುಗ್ಧತೆಯು ಏಕೆ ಪದೇ ಪದೇ ಮೋಸ ಹೋಗುತಿದೆ 


ಒಳ್ಳೆಯವರ ಬಲಿ ಇಲ್ಲಿ ಪುನರಾವರ್ತನೆ ಆಗುತಿದೆ  

ಕಂಬನಿಯ ಉಪ್ಪು ಅಡುಗೇಕೆ ಬಳಕೆಯಾಗುತಿದೆ 


ಸತ್ಯ ಗೆಲ್ಲುತ್ತದೆ ಎನ್ನುತ ಸುಳ್ಳನ್ನೇ ಪ್ರೀತಿಸುತಿರುವರು 

ಜೀವನಶ್ರದ್ಧೆಯು ಏಕೆ ಮಸಣದ ಹಾದಿ ಹಿಡಿಯುತಿದೆ 


ಕಾಲವು ಕಾಲುಗಳಿಗೆ ಬೇಡಿ ಹಾಕಿ ನಿಲ್ಲಿಸುತಿದೆ 'ಮಲ್ಲಿ' 

ಜೀವನವೇಕೆ ಕನ್ನಡಿಯೊಳಗಿನ ಗಂಟಾಗಿ ಕಾಡುತಿದೆ 


-✍️ರತ್ನರಾಯಮಲ್ಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ