ಅಕ್ಟೋಬರ್ 09, 2020

ಪ್ರತಿಭೆಯ ಅಜಾನುಬಾಹು ಆರ್ಜೆ ಮಂಜು

 

ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ-ಕಿರುತೆರೆ ಬಹುದೊಡ್ಡ ಉದ್ಯಮವಾಗಿ ಪ್ರತಿಭೆಗಳ ಅನಾವರಣಕ್ಕೆ ಬೃಹತ್ ವೇದಿಕೆಗಳಾಗಿವೆ. ಅದರಲ್ಲೂ ಕಿರುತೆರೆ ಯಶಸ್ಸು-ಜನಪ್ರೀಯತೆಗೆ ಅತಿ ದೊಡ್ಡ ತಾಣವಾಗಿದೆ. ಹಾಗಂತ ಇಲ್ಲಿ ಗುರುತಿಸಿಕೊಂಡು ಯಶಸ್ವಿಯಾಗುವುದು ಅಷ್ಟು ಸುಲಭದ ಕೆಲಸವಲ್ಲ. ಅಲ್ಲದೇ ಗಾಡ್ ಫಾದರ್ಗಳಿಲ್ಲದೇ ಇಲ್ಲಿ ಕಾಲಿಟ್ಟು ಹೆಚ್ಚು ಹೊತ್ತು ನಿಲ್ಲಲು ಕಷ್ಟ ಸಾಧ್ಯವೆ. ಇತ್ತಿಚಿನ ಬೆಳವಣಿಗೆಗಳನ್ನು ನೋಡಿದರೆ ದೂರದ ಬೆಟ್ಟ ಎನ್ನಬಹುದೇನೋ. ಇಂಥ ಪರಿಸ್ಥಿಯಲ್ಲಿ ತಮ್ಮ ಪ್ರತಿಭೆಯ ಅಗಾಧತೆ ಮತ್ತು ವಿಸ್ತಾರತೆಯ ಮೂಲಕ ಎರಡು ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತುಂಗಕ್ಕೇರುವ ತವಕದಲ್ಲಿದ್ದಾರೆ ಇವರು.

ನಟ, ನಿರೂಪಕ, ಕಂಠದಾನ ಕಲಾವಿದ, ಸ್ಕ್ರಿಪ್ಟ್ ರೈಟರ್, ವಿಡಿಯೋ ಎಡಿಟರ್, ರಿಪೋರ್ಟರ, ಶತಕ ಕಾರ್ಯಕ್ರಮಗಳ ನಿರೂಪಕ, ಸತತ 10 ಗಂಟೆಗಳ ಕಾಲ ನಿರಂತರ ಕಾರ್ಯಕ್ರಮ ನಿರೂಪಿಸಿ ದಾಖಲೆ ಮಾಡಿರುವ, ಕುಶಾಗ್ರಮತಿ ಹಾಗೂ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು ಆಗಿರುವ ಪ್ರತಿಭಾ ಸಂಪನ್ನರ ಬಗ್ಗೆ ಇಲ್ಲಿ ಬರೆಯಲು ಕಾರಣ ಸಾಕಷ್ಟಿವೆ.

ಪೀಠಿಕೆ ನೋಡಿ ಇವರು ಎಷ್ಟು ಜನರಿರಬಹುದು ಎಂದು ಭಾವಿಸಿದರೆ ಅದು ನಿಮ್ಮ ತಪ್ಪಲ್ಲ. ಆಶ್ಚರ್ಯ ಕೇಳಿ ಇಷ್ಟೆಲ್ಲ ವಿವರಣೆ ಒನ್ ಆಂಡ್ ಓನ್ಲಿ ಒಬ್ಬ ವ್ಯಕ್ತಿ ಬಗ್ಗೆನೆ. ಆದರೆ ಇವರು ದೂರದ ಬೆಂಗಳೂರು, ಮೈಸೂರು ಭಾಗದವರಿರಬೇಕು ಎಂದರೆ ಅದು ಖಂಡಿತ ತಪ್ಪು. ಪ್ರತಿಭೆಗೆ ಗಡಿ ಸೀಮೆಗಳ ಎಲ್ಲೆ ಇಲ್ಲ. ಹಿಂದುಳಿದ ಮುಂದುವರೆದ ಹಣೆಪಟ್ಟಿಗಳ ಗೊಡವೆ ಇಲ್ಲ. ಆದರೆ ಬೆಸರ ಮತ್ತು ಖುಷಿ ಏಕಕಾಲಕ್ಕೆ ತರಿಸುವ ವಿಚಿತ್ರವೆಂದರೆ ಇವರ ಕಾರ್ಯಕ್ಷಮತೆ ನೋಡಿನೀವು ಬೆಂಗಳೂರಿನವರಿರಬೇಕುಅಂದಾಗ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಇವರನ್ನು ಪರಿಚಯ ಮಾಡಿಕೊಡಲು ಹೆಚ್ಚಿನ ವಿವರಣೆಯ ಅಗತ್ಯವಿಲ್ಲ, ಆರ್.ಜೆ.ಮಂಜು ಹಿರೋಳಿ ಹೆಸರೊಂದೆ ಸಾಕು.

ಇವರು ವಾರ್ತಾ ವಾಚಕನಾಗಿ, ಆಕಾಶವಾಣಿ ಉಧ್ಘೋಷಕನಾಗಿ, ನಿರೂಪಕನಾಗಿ, ಕಂಠದಾನ ಕಲಾವಿದನಾಗಿ, ಎಫ್ ಎಮ್ ರೇಡಿಯೋ ಜಾಕೀಯಾಗಿ ಮತ್ತು ಟಿವಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಅರಳು ಹುರಿದಂತೆ ಮಾತಾಡಬಲ್ಲ ಮಲ್ಲ. ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದು, ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆಯನ್ನು ಯಶಸ್ವಿಯಾಗಿ ಮಾಡಿಶತಕ ವೀರ ನಿರೂಪಕಆಗಿದ್ದಾರೆ. ಇವರ ಇದುವರೆಗಿನ ಸಾಧನೆಗೆ ಸಾಕಷ್ಟು ಸನ್ಮಾನಗಳು ಮತ್ತು ಪ್ರಶಸ್ತಿಗಳು ಲಭಿಸಿವೆ.

ಆರ್ ಜೆ ಮಂಜು ಹಿರೋಳಿ ಅಕ್ಟೋಬರ್ 10ರಂದು ವೀರಶೈವ ಹಿಂದೂ ಲಿಂಗಾಯತ ಪಂಚಮಸಾಲಿ ಕುಟುಂಬದ ದಂಪತಿಗಳಾದ ಶ್ರೀಮತಿ ಅಲಕ್ನಂದಾ ಹಾಗೂ ಶ್ರೀ ಜಗನ್ನಾಥರಾವ್ ಹಿರೋಳಿಯವರ ಎರಡನೆ ಮಗನಾಗಿ ಜನಿಸುತ್ತಾರೆ. ತಂದೆ ಜಗನ್ನಾಥರಾವ್ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ಸರಸಂಬಾ ಗ್ರಾಮದವರಾಗಿದ್ದು ಇವರು ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಇವರ ಕುಟುಂಬ ಸಧ್ಯ ಕಲಬುರಗಿ ಮಹಾನಗರದಲ್ಲಿ ವಾಸವಾಗಿದೆ. ಇವರ ಮೂಲ ಹೆಸರು ಶ್ರೀನಾಥ. ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳಕ್ಕೆ ಹೋದಾಗ ಶ್ರೀ ಮಂಜುನಾಥರ ಹೆಸರನ್ನು ಇಡಲಾಯಿತಂತೆ.

ಮಂಜು ಅವರನ್ನು ಡಾಕ್ಟರ್ ಮಾಡಬೇಕೆನ್ನುವುದು ತಂದೆ ತಾಯ ಆಸೆ. ಆದರೆ ಆ್ಯಕ್ಟರ್ ಆಗುವ ಕನಸು ಕಾಣುತಿದ್ದ ಮಂಜು ಅವರಿಗೆ ನಟನಾ ವೃತ್ತಿ ಬೇಡ ಎನ್ನುವ ಒತ್ತಡಡ ಹೆಚ್ಚಾಗಿ ಒಂದು ಸಮಯದಲ್ಲಿ ಆತ್ಮಹತ್ಯೆಯ ಬಗ್ಗೆ ಕೂಡ ಯೋಚಿಸಿದ್ದರಂತೆ. ಆದರೆ ಅಣ್ಣನ  ಸಾಂತ್ವನದಿಂದ ನಿರ್ಧಾರ ಕೈಬಿಟ್ಟರಂತೆ. ಅಣ್ಣ ಸಂತೋಷ ಕುಮಾರ ಶಿಕ್ಷಕರಾಗಿದ್ದು ಮಂಜು ಅವರ ಪಾಲಿನ ನಿಜವಾದ ಸ್ನೇಹಿತ, ಬೆನ್ನೆಲುಬು ಕೂಡಾ.

ಮಂಜು ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ಕಲಬುರಗಿಯ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ಶಾಲೆಯಲ್ಲಿ ಮುಗಿಸುತ್ತಾರೆ. ಚಿಕ್ಕಂದಿನಿಂದಲೇ ಇವರು ಶಾಲೆಯ ತರಗತಿಗಳಲ್ಲಿ ನೃತ್ಯ ಮಾಡುವ ಮೂಲಕ ಸಹಪಾಠಿಗಳನ್ನು ರಂಜಿಸುತ್ತಿದ್ದರು. ಅಲ್ಲದೆ ಚಿತ್ರಕಲೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಇವರ ಕಾಲೇಜು ದಿನಗಳ ಸಹಪಾಠಿಗಳಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಕೂಡಾ ಒಬ್ಬರು.

ಬಾಲ್ಯದಲ್ಲೆ ಕಕ್ಕುಲಾತಿಯಿಂದ ಇಟ್ಟುಕೊಂಡಿದ್ದ ನಟನಾಗುವ ಕನಸನ್ನು ನನಸಾಗಿಸಲು ಇವರು ಕಾಲೇಜು ಮುಗಿದ ನಂತರ ಬೆಂಗಳೂರಿಗೆ ತೆರಳಿ, ಅಲ್ಲಿನ ಹೇಸರಟಘಟ್ಟದಲ್ಲಿರುವ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಅಭಿನಯ ತರಬೇತಿ ಸಂಸ್ಥೆಯಾಗಿರುವ ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ನಲ್ಲಿ ನಟನೆಯ ಡಿಪ್ಲೋಮಾ ಪದವಿಯನ್ನು ಪಡೆಯುತ್ತಾರೆ. ಇವರ ಅಭಿನಯ ತರಬೇತಿಯ ಸಹಪಾಠಿಗಳಲ್ಲಿಚಾರ್ ಮಿನಾರ್ಚಿತ್ರದ ನಾಯಕಿ ಮೇಘನಾ ಗಾಂವಕರ್, ರಾಜ್ ಮ್ಯೂಜಿಕ್ ಚಾನೇಲ್ ನಿರೂಪಕ ಅಶೋಕ ಶರ್ಮಾ, ಜಾತ್ರೆ ಸಿನಿಮಾ ನಿರ್ದೇಶಕ ರವಿತೇಜಾ ಮತ್ತು ಕಿರುತೆರೆ ನಟ ಮತ್ತು ನಿರ್ದೇಶಕ ನವೀನ ಸೋಮನಹಳ್ಳಿ ಸೇರಿದ್ದಾರೆ.

ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ಆದರ್ಶ ಫಿಲ್ಮಂ ಇನ್ಸಟಿಟ್ಯೂಟ್ನಲ್ಲಿ ನಟನೆಯ ತರಬೇತಿ ಮುಗಿದ ನಂತರ ಕೆಲವು ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಿರುವಾಗ ಇವರ ಮುಖಕ್ಕೆ ಆದ ಮೇಕಪ್ ರಿಯಾಕ್ಷನ್ನಿಂದ ಚಿಕಿತ್ಸೆ ಪಡೆಯಲು ಪುಣೆಗೆ ತೆರಳುವುದಕ್ಕಾಗಿ ಮರಳಿ ಕಲಬುರಗಿಗೆ ವಾಪಸಾದರು. ಬಿಡುವಿನಲ್ಲಿ ಇವರು ರಾಜಸ್ಥಾನ ರಾಜ್ಯದ ಪಿಲನಿಯ ಶ್ರೀಧರ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣವನ್ನು ಮುಗಿಸಿಕೊಳ್ಳುತ್ತಾರೆ.

ಮಂಜು ಅವರ ವೃತ್ತಿ ಬದುಕಿಗೆ ತಿರುವು ಕೊಟ್ಟ ಘಟನೆ ನಡೆದದ್ದು ತೀರಾ ಆಕಸ್ಮಿಕ. ತಮ್ಮ ಮುಖಕ್ಕೆ ಆದ ಮೇಕಪ್ ರಿಯಾಕ್ಷನ್ಗೆ ಮಹಾರಾಷ್ಟ್ರದ ಪುಣೆ, ಸೋಲಾಪೂರ ಮತ್ತು ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಇವರಿಗೆ ಪರಿಚಿತರು ಟಿವಿ ಧಾರಾವಾಹಿ ನಿರ್ದೇಶಕರಾದ ಬಸವರಾಜ್ ನಂದಿಧ್ವಜ್ ಅವರು ಅಂದು ಉದಯ ಟಿವಿಯಲ್ಲಿ ಅತ್ತ್ಯಂತ ಜನಪ್ರಿಯ ಕಾದಂಬರಿ ಧಾರಾವಾಹಿ ನಟಿ ಶ್ವೇತಾ ಚಂಗಪ್ಪ ಅವರನ್ನು ಕರೆತಂದು ಕಲಬುರಗಿಯಲ್ಲಿಹೂವೊಂದು-ಮುಳ್ಳೆರಡುಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದರು. ಸಂಧರ್ಭದಲ್ಲಿ ನಿರ್ದೇಶಕರು ಮಂಜು ಅವರಿಗೆ ಒಂದು ಪಾತ್ರಕ್ಕಾಗಿ ಆಹ್ವಾನಿಸುತ್ತಾರೆ. ಆದರೆ ವೈದ್ಯರು ಒಂದು ವರ್ಷದವರೆಗೂ ಮುಖಕ್ಕೆ ಮೇಕಪ್ ಹಚ್ಚಬಾರದೆಂದು ಸಲಹೆ ನೀಡಿದ್ದರು. ಹೀಗಾಗಿ ಕ್ಯಾಮರಾ ಹಿಂದೆ ಕೆಲಸ ಮಾಡಲು ನಿರ್ಧರಿಸುತ್ತಾರೆ. ಆದರೆ ಪಾತ್ರ ಮಾಡಲೇ ಬೇಕೆನ್ನುವುದು ದೈವ ನಿರ್ಧಾರವಾಗಿತ್ತು ಎಂಬಂತೆ ಪಾತ್ರಧಾರಿಯೊಬ್ಬ ಕೈಕೊಟ್ಟ ಕಾರಣ ಪಾತ್ರ ಅನಿವಾರ್ಯವಾಗಿ ಮಂಜು ಅವರೇ ಮಾಡಬೇಕಾಗಿ ಬಂತು. ವೈದ್ಯರ ಕಟ್ಟಪ್ಪಣೆಯ ಮಧ್ಯೆಯೂ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಕೊಂಡರು.

ಹೂವೊಂದು-ಮುಳ್ಳೆರಡು ಧಾರಾವಾಹಿಯ ನಿರ್ಮಾಪಕರಾಗಿದ್ದ ಭವಾನಿ ಸಿಂಗ್ ಠಾಕೂರ್ ಅವರು ಮಂಜು ಅವರ ನಟನಾ ಕೌಶಲ್ಯವನ್ನು ಮತ್ತು ಅವರು ನಟನಾ ತರಬೇತಿ ಪಡೆದಿರುವುದನ್ನು ಅರಿತು ತಮ್ಮ ಸ್ಥಳೀಯ ಸುದ್ದಿವಾಹಿನಿ ಜಿ-ಸಿಟಿ ಕೇಬಲ್ನಲ್ಲಿ ವಾರ್ತಾ ವಾಚನಕ್ಕಾಗಿ ಆಹ್ವಾನ ನೀಡುತ್ತಾರೆ. ಇದು ಅವರ ವೃತ್ತಿ ಜೀವನದ ಬಹುಮುಖ್ಯ ತಿರುವು. ಆಗ ಮಂಜು ಅವರಿಗೆ ದೊರೆತ ಮೊದಲ ಸಂಭಾವನೆ ಕೇವಲ 500 ರೂಪಾಯಿ.

ಕೇವಲ ಉದಯ ಟಿವಿ ಮತ್ತು -ಟಿವಿ ಚಾನೆಲ್ಗಳಿದ್ದ ಸಂಧರ್ಭದಲ್ಲಿ ಸ್ಥಳೀಯ ಸುದ್ದಿ ವಾಹಿನಿಯಲ್ಲಿ -ಟಿವಿ ಶೈಲಿಯಲ್ಲಿ ಸುದ್ದಿ ವಾಚನ ಮಾಡಿ ಜನರ ಮೆಚ್ಚುಗೆ ಪಡೆದ ಕೀರ್ತಿ ಮಂಜು ಅವರಿಗೆ ಸಲ್ಲುತ್ತದೆ. ಕಲಬುರಗಿ ನಗರದ ಪ್ರತಿ ಮನೆ-ಮನಗಳಲ್ಲು ಮಕ್ಕಳಿಂದ ಹಿಡಿದು ವೃಧ್ಧರವರೆಗೂ ಎಲ್ಲರು ಗುರುತಿಸುವ ಹೆಸರಾಯಿತು ಮಂಜುನಾಥ ಹಿರೋಳಿ. -ಟಿವಿ ಇಂದ ಟಿವಿ9 ಚಾನೆಲ್ಗೆ ಸೇರುವ ಮುನ್ನ ಕಲಬುರಗಿ ನಗರಕ್ಕೆ ಭೇಟಿ ನೀಡಿದ್ದ ಕನ್ನಡದ ಖ್ಯಾತ ವಾರ್ತಾ ವಾಚಕರಾದ ರಂಗನಾಥ ಭಾರದ್ವಾಜ್ ಮತ್ತು ರಾಧಿಕಾ ರಾಣಿ ಅವರು ಮಂಜು ಅವರ ವಾರ್ತಾ ವಾಚನವನ್ನು ನೇರವಾಗಿ ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇಲ್ಲಿಂದ ಶುರುವಾದ ಇವರ ಪಯಣ ನಿರಂತರವಾಗಿ ಮುಂದುವರೆಯುತ್ತಲೆ ಹೋಯಿತು. ಜಿ-ಸಿಟಿಯಿಂದ ಆಕಾಶವಾಣಿ, ಆಕಾಶವಾಣಿಯಿಂದ ಸೂಪರ್ ಹಿಟ್ಸ್ 93.5 ರೆಡ್ ಎಫ್ ಎಮ್, ರೆಡ್ ಎಫ್ ಎಮ್ನಿಂದ ಸುದ್ದಿ ಸಮಯ. ಪಯಣ ಏಳಿಗೆಯ ಒಂದೊಂದು ಏಣಿಯಾದವು.

2007ರಲ್ಲಿ ಪ್ರಸಾರ ಭಾರತಿ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ವತಿಯಿಂದ ನಡೆಸಲಾಗುವ ಪರೀಕ್ಷೇಯಲ್ಲಿ ಉತ್ತೀರ್ಣರಾದ ಇವರು ಕಲಬುರಗಿ ಆಕಾಶವಾಣಿ ಕೇಂದ್ರಕ್ಕೆ ಉಧ್ಘೋಷಕರಾಗಿ ಸೇರಿ ನವದೆಹಲಿಯಿಂದ ಪ್ರತಿಷ್ಠಿತವಾಣಿಪ್ರಮಾಣಪತ್ರವನ್ನು ಪಡೆದರು.

2008ರಲ್ಲಿ ಭಾರತದ ಅತಿ ದೊಡ್ಡ ರೇಡಿಯೋ ನೆಟ್ವರ್ಕ ಹೊಂದಿರುವ ಸೂಪರ್ ಹಿಟ್ಸ್ 93.5 ರೆಡ್ ಎಫ್ ಎಮ್ ಕಲಬುರಗಿ ಕೇಂದ್ರಕ್ಕೆ ರೇಡಿಯೋ ಜಾಕಿಯಾಗಿ ಆಯ್ಕೆಯಾದರು. ಅಲ್ಲಿಂದ ಮಂಜುನಾಥ ಹಿರೋಳಿ ಆರ್ಜೆ ಮಂಜು ಆದರು. ಇವರು ಬೆಳಿಗ್ಗೆ 10 ಗಂಟೆಗೆ ಆರ್ ಜೆ ಭಾರತಿ ಜೊತೆ ನಡೆಸಿಕೊಡುತ್ತಿದ್ದಕಂಡೀರಾ-ಕಲ್ಬುರ್ಗಿಶೋ ಮೂಲಕ ಕಲಬುರಗಿ ಜನರ ಮನೆ ಹುಡುಗ ಆರ್ ಜೆ ಮಂಜು ಆಗಿಬಿಟ್ಟರು. ಮಧ್ಯಾಹ್ನ 2 ಗಂಟೆಗೆಸೂಪರ್ ಸಿಂಗರ್ಶೋ ಮೂಲಕ ಮಂಜು ತಾವು ಒಬ್ಬ ಉತ್ತಮ ಗಾಯಕ ಎಂಬುವುದನ್ನು ಸಾಬೀತು ಪಡಿಸಿದರು. ಸಂಜೆ 5 ಗಂಟೆಗೆ ಆರ್ ಜೆ ಮಧು ಜೊತೆ ಸಿನಿಮಾ ಸುದ್ದಿಗಳಿರುವಪಾಪ್ಕಾರ್ನಶೋ ಇವರಿಗೆಮುಸ್ಸಂಜೆ-ಮಂಜುಎಂಬ ಹೆಸರು ತಂದುಕೊಟ್ಟಿತು. ಇವರಈವನಿಂಗ್ ಮಂತ್ರಾ ಮತ್ತು ಬಿಂದಾಸ್ ಬಜಾಯಿಸಿಶೋಗಳು ಪಡ್ಡೆ ಹುಡುಗರ ನೆಚ್ಚಿನ ಶೋಗಳಾದವು. ಒಂದು ವಾರ ಗಟ್ಟಲೆ ಜನ ಫೋನ್ ಕಾಲ್ಗಳಿಗಾಗಿ ಪ್ರಯತ್ನಿಸಿ ಇವರ ಶೋನಲ್ಲಿ ಮಾತಾಡಲು ಕಾಯುತ್ತಿದ್ದರು. ಮಧ್ಯ ರಾತ್ರಿಯಲವಾಲೋಜಿಶೋ ನಡೆಸಿಕೊಡುವ ಮೂಲಕ ಮಂಜು ಎಷ್ಟೋ ಪ್ರೇಮಿಗಳನ್ನು ಒಂದು ಮಾಡಿದರಲ್ಲದೆ, ಪ್ರೀತಿಯ ಅಮಲಿನಲ್ಲಿ ದಾರಿ ತಪ್ಪುತ್ತಿದ್ದ ಯುವ ಪೀಳೀಗೆಯನ್ನು ಸರಿಯಾದ ದಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಎಫ್ ಎಮ್ ರೇಡಿಯೋ ಮೂಲಕ ಆರ್ ಜೆ ಮಂಜು ಅವರ ಕೀರ್ತೀ ಕೇವಲ ಕಲಬುರಗಿ ಅಷ್ಟೆ ಅಲ್ಲದೆ ನೆರೆಯ ಜಿಲ್ಲೆಗಳಾದ ವಿಜಯಪೂರ ಮತ್ತು ನೆರೆಯ ರಾಜ್ಯವಾದ ಮಹಾರಾಷ್ಟ್ರದ ಗಡಿ ಜಿಲ್ಲೆ ಸೋಲಾಪುರದ ಅಕ್ಕಲಕೋಟ ತಾಲೂಕಿನ ಜನಮನದವರೆಗೂ ಬೆಳೆಯಿತು.

2010ರಲ್ಲಿ ಮಂಜು ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ ಸುವರ್ಣ ನ್ಯೂಸ್ ಚಾನೆಲ್ ಹಿರಿಯ ವರದಿಗಾರರಾದ ಅಜೀತ್ ಹನುಮಕ್ಕನವರ್ ಅವರೊಂದಿಗೆಆರ್.ಜೆ ಆಗಲು ಬೇಕಾಗುವ ಅರ್ಹತೆಗಳು ಮತ್ತು ಒಬ್ಬ ನಿರೂಪಕನಿಗಿರುವ ಸವಾಲುಗಳುಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನೀಡಿದರು.

ಇದೇ ವೇಳೆ 2010 ಮಧ್ಯದಲ್ಲಿ ಎಪ್ ಎಮ್ ಬಿಟ್ಟು ಮಂಜು ನೂತನವಾಗಿ ಪ್ರಾರಂಭವಾಗಿತ್ತಿದ್ದ ಸಮಯ ನ್ಯೂಸ್ ಕನ್ನಡದ 24 ಗಂಟೆಗಳ ಸುದ್ದಿ ವಾಹಿನಿಗಾಗಿ ಧಾರವಾಡದಲ್ಲಿ ನಡೆದ ಸಂದರ್ಶನದಲ್ಲಿ ಆಯ್ಕೆಯಾಗಿ ವಾರ್ತಾ ವಾಚನಕ್ಕಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ಒಂದು ತಿಂಗಳ ಇಂಟ್ರನ್ಶಿಪ್ ತರಬೇತಿಯನ್ನು ಪಡೆಯುತ್ತಾರೆ.

2011 ಕೊನೆಯಲ್ಲಿ ಮಂಜು ವಿಶ್ವದ 72ಕ್ಕೂ ಅಧಿಕ ದೇಶಗಳಲ್ಲಿ ಪ್ರಸಾರವಾಗುವ ಭಾರತದ ಮೊಟ್ಟ ಮೊದಲ 24 ಗಂಟೆಗಳ ಆಧ್ಯಾತಿಮಕ ಚಾನೇಲ್ಶ್ರೀ ಶಂಕರಚಾನೆಲ್ನಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರವಾಗುವದೇವತಾ-ದರ್ಶನಕಾರ್ಯಕ್ರಮದ ನಿರೂಪಕರಾಗಿ ಉತ್ತರ ಕರ್ನಾಟಕದ 30 ಪ್ರೇಕ್ಷಣೀಯ ಆಧ್ಯಾತ್ಮಿಕ ಸ್ಥಳಗಳ ಮಾಹಿತಿಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ.

2012ರಲ್ಲಿ ಕಲಬುರಗಿಯ ಸ್ಥಳಿಯ ಜನಪ್ರಿಯ ವಾಹಿನಿಇನ್-ಗುಲಬರ್ಗಾಚಾನೇಲ್ನಲ್ಲಿಹೆಲೋ-ಗುಲಬರ್ಗಾಎಂಬ ಬ್ರೇಕ್ಫಾಸ್ಟ್ ಶೋ ನಡೆಸಿಕೊಟ್ಟರು. ಕಾರ್ಯಕ್ರಮದ ಜನಪ್ರೀಯತೆ ಎಷ್ಟಿತ್ತೆಂದರೆ ಪ್ರೇಕ್ಷಕರಷ್ಟೆ ಅಲ್ಲ ಪತ್ರಿಕೆ ಮತ್ತು ಟಿವಿ ಮಾಧ್ಯಮದವರು ಹೊಗಳಿ ಬರೆಯುವಂತಾಯಿತು.

2013ರಲ್ಲಿ ಕಲಬುರಗಿ ಜಿಲ್ಲೆ, ಕಲಬುರಗಿ ತಾಲೂಕಿನ ಸುಕ್ಷೇತ್ರ ಮುತ್ತ್ಯಾನ ಬಬಲಾದಿನ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಲಿಂಗೈಕ್ಯ ಶ್ರೀ ಗುರು ಚನ್ನವೀರ ಮಹಾಶಿವಯೋಗಿಗಳ ಮತ್ತು ಪರಮ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳ ಜೀವನಾಧಾರಿತ ಕಿರುಚಿತ್ರದಿವ್ಯ-ಜ್ಯೋತಿ ಸಹ-ನಿರ್ದೇಶಕರಾಗಿ ಕೆಲಸಮಾಡಿ ಅದರಲ್ಲಿನ ಜನಪ್ರಿಯಬಬಲಾದಿಯ ಭಗವಂತಹಾಡಿನಲ್ಲಿ ನಟನೆ ಮಾಡುವ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡರು.

2013ರಲ್ಲೇ ಪುನ: ರೆಡ್ ಎಫ್ ಎಮ್ ಸೇರಿ ಬೆಳಿಗ್ಗೆ 7ರಿಂದನಮಸ್ಕಾರ ಗುಲಬರ್ಗಾಶೋ ನಡೆಸಿಕೊಡುವ ಮೂಲಕ ಕಲಬುರಗಿ ನಗರವನ್ನು ಎಬ್ಬಿಸುವ ಕೋಗಿಲೆ ಕಂಠವಾದರು. ಚಿಕ್ಕವರಿಂದ ಹಿಡಿದು ವೃದ್ಧರವರೆಗೂ, ಶಾಲಾ ಮಕ್ಕಳಿಂದ ಹಿಡಿದು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಗೃಹಿಣಿಯರು, ಡಾಕ್ಟರ್ಸ್, ಇಂಜಿನಿಯರ್ಸ್ ಮತ್ತು ಪ್ರಾಧ್ಯಾಪಕರುಗಳು ಕೂಡ ಆರ್ ಜೆ ಮಂಜು ಶೋ ತಪ್ಪದೆ ಕೇಳುವಂತಾಯಿತು. ಸಂಧರ್ಭದಲ್ಲಿ ಮಂಜು ಅವರ ಜನಪ್ರಿಯತೆ ಎಷ್ಟರ ಮಟ್ಟಿಗೆ ಏರಿತು ಅಂದ್ರೆ, ಎಷ್ಟೋ ಗೃಹಿಣಿಯರು ಮಂಜು ಶೋ ಮಡುತ್ತಿರುವ ಸಂಧರ್ಭದಲ್ಲಿ ಟಿಫಿನ್ ಹಿಡಿದು ಎಫ್ ಎಮ್ ಆಫೀಸ್ಗೆ ತೆರಳಿ ಮಂಜುಗಾಗಿ ಕಾಯ್ತಾ ಕೂಡುತ್ತಿದ್ದರಲ್ಲದೆ, ಮಂಜು ಸ್ಟುಡಿಯೋದಿಂದ ಹೊರಗೆ ಬಂದು ತಿನ್ನುವವರೆಗೂ ಬಿಡುತ್ತಿರಲಿಲ್ಲ. ಇನ್ನು ಇವರ ಹುಟ್ಟುಹಬ್ಬ ಬಂತೆಂದರೆ ಸಾಕು ಇಡಿ ಆಫೀಸ್ ಹೂಗುಚ್ಛಗಳಿಂದ ತುಂಬುತ್ತಿತ್ತು.

ಮಂಜು ಒಮ್ಮೆ ಮೂತ್ರಪಿಂಡದಲ್ಲಿ ಹರಳಿನ ಸಮಸ್ಯೆಯಾಗಿ ವಾರಗಟ್ಟಲೆ ಆಸ್ಪತ್ರೆ ಸೇರಿ ಮರಳಿ ಶೋಗೆ ವಾಪಸಾದಾಗ ಎಷ್ಟೋ ಜನ ಕೇಳುಗರು ಕಣ್ಣೀರಿಟ್ಟಿದ್ದರಲ್ಲದೆ ಆಸ್ಪತ್ರೆ ಮತ್ತು ಆಫೀಸ್ ತುಂಬ ಹಣ್ಣು ಮತ್ತು ತಂಪು ಪಾನಿಯಗಳ ರಾಶಿಯನ್ನೆ ತಂದಿಟ್ಟಿದ್ದರು. ಎಷ್ಟೋ ಹುಡುಗಿಯರು ಮಂಜು ಅವರು ಶೋ ನಡೆಸಿಕೊಡುತ್ತಿದ್ದ ಸಮಯದಲ್ಲೇ ಲೈವ್ ಲವ್ ಪ್ರಪೋಸ್ ಮಾಡುವ ಮೂಲಕ ಮಂಜು ಅವರು ಎಲ್ಲರೆದುರು ಮುಜುಗರಕ್ಕೆ ಒಳಗಾಗುವಂತೆ ಮಾಡಿದ ಸಂಧರ್ಭಗಳು ನಡೆದಿದ್ದುಂಟು.

2014ರಲ್ಲಿ ಇವರು ಮೇಲಾಧಿಕಾರಿಗಳ ಕಿರುಕುಳದಿಂದ ಮತ್ತೆ ಎಫ್ ಎಮ್ಗೆ ವಿದಾಯ ಹೇಳಿದಾಗ ಕಿಚ್ಚ ಸುದೀಪ್ ಅವರಮುಸ್ಸಂಜೆ ಮಾತುಚಿತ್ರದಲ್ಲಿನ ಸನ್ನಿವೇಶದಂತೆ ಮಂಜು ಅವರ ಅಭಿಮಾನಿಗಳು ರೆಡ್ ಎಫ್ ಎಮ್ ಕಛೇರಿಗೆ ತೆರಳಿ ಮೇಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಇವರನ್ನು ಮತ್ತೆ ವಾಪಸ್ ಕರೆಸಿಕೊಳ್ಳುವಂತೆ ಪಟ್ಟು ಹಿಡಿದು, ನಡು ರಸ್ತೆಯಲ್ಲೆ ಕಣ್ಣೀರಿಟ್ಟಿದ್ದ ಭಾವುಕ ಸನ್ನಿವೇಷ ಮಂಜು ಅವರು ಜನರ ಮನದಲ್ಲಿ ಅದೆಂಥ ವಿಶಿಷ್ಠ ಸ್ಥಾನವನ್ನು ಪಡೆದಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಾಗಿತ್ತು. ಅಲ್ಲದೆ ಮಕ್ಕಳು ಅವರ ನೆಚ್ಚಿನ ಮಂಜು ಅಣ್ಣ ಎಫ್ ಎಮ್ ಬಿಟ್ಟಿರುವ ವಿಷಯ ಕೇಳಿ ಹಾಸಿಗೆ ಹಿಡಿದು ಚಡಪಡಿಸಿದ ಸನ್ನಿವೇಶಗಳು ಮನ ಕಲುಕುತ್ತವೆ. ಇಂದಿಗೂ ಮಂಜು ಅವರು ಎಫ್ ಎಮ್ಗೆ ವಾಪಸ್ಸಾಗಲಿ ಅಂತ ಪೂಜೆ-ಪುನಸ್ಕಾರ, ವೃತ-ಉಪವಾಸಗಳನ್ನು ಮಾಡುತ್ತಿರುವ ಅವರ ಅಭಿಮಾನಿಗಳೇನು ಕಡಿಮೆ ಇಲ್ಲ.

2015ರಲ್ಲಿ ಮಂಜು ಯಾದಗಿರಿ ಜಿಲ್ಲೆಯ ಸುಕ್ಷೇತ್ರ ಮೈಲಾಪೂರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆಲ್ಬಂನ ಎರಡು ಹಾಡುಗಳಲ್ಲಿ ಅಭಿನಯಿಸಿದರು. ಇವರು ನಟಿಸಿರುವ ಆಲ್ಬಂನ ಸಿಡಿಗಳು ಮೈಲಾರಲಿಂಗೇಶ್ವರನ ಪ್ರತಿಯೊಬ್ಬ ಭಕ್ತರ ಮನೆಗಳಲ್ಲೂ ಕಾಣಸಿಗುತ್ತವೆ. ಅಲ್ಲದೆ ಇವರು ಭಾವುಕರಾಗಿ ನಟಿಸಿರುವ ಹಾಡಿನ ದೃಶ್ಯಗಳನ್ನು ಮೈಲಾಪುರದ ಅಂಗಡಿಗಳಲ್ಲಿ ಈಗಲೂ ನೋಡಬಹುದಾಗಿದೆ.

2015ರಲ್ಲೇ ಇವರು ಶ್ರೀ ಸುಮಂಗಲಿ ಡಿಜಿಟಲ್ ಚಾನೆಲ್ ಅಂದರೆ ಎಸ್.ಎಸ್.ಡಿಜಿಟಲ್ ಸ್ಥಳಿಯ ವಾಹಿನಿಗೆ ಸೇರಿಸುದ್ದಿ ಸಮಯ ಮೂಲಕ ಕಲಬುರಗಿಯ ಸುದ್ದಿ ವಾಚನದ ಶೈಲಿಯನ್ನು ಸ್ಯಾಟಲೈಟ್ ಚಾನೇಲ್ಗಳ ಗುಣಮಟ್ಟಕ್ಕೆ ಸರಿಸಾಟಿಯಾಗುವಂತೆ ಮಾಡಿ, ಎಲ್ಲರೂ ಹುಬ್ಬೇರಿಸುವಂತೆ ಮಾಡಿರುವುದು ಅವರ ಇನ್ನೊಂದು ಸಾಧನೆ.

2006ರಿಂದ ಇಲ್ಲಿಯವರೆಗೂ ಸಾವಿರಾರು ಜಾಹಿರಾತುಗಳಿಗೆ ಧ್ವನಿ ನೀಡುತ್ತಿರುವ ಅವರ ಕಂಠ ಸಿರಿಯನ್ನು ಕರ್ನಾಟಕದ ಮೂಲೆ ಮೂಲೆಯಲ್ಲೂ ಕೇಳಬಹುದಾಗಿದೆ.

ಮಂಜು ಅವರಿಗೆ ಆದ್ಯಾತ್ಮಿಕತೆಯ ಕಡೆಗೆ ಒಲವು ಅಧಿಕವಾಗಿರುವುದರಿಂದ ಹಲವಾರು ಪೂಜ್ಯ ಮಠಾಧೀಶರ ಸಂಪರ್ಕದಲ್ಲಿದ್ದಾರೆ. ಮಂಜು ಅವರು ಶಿರಡಿ ಹಾಗೂ ಪುಟ್ಟಪರ್ತಿಯ ಸಾಯಿ ಬಾಬಾರಲ್ಲಿ ಅಪಾರವಾದ ಶ್ರಧ್ಧೆಯನ್ನು ಹೊಂದಿದ್ದಾರೆ. ಅಲ್ಲದೆ ಪ್ರತಿದಿನ ಬೆಳಿಗ್ಗೆ 2 ಗಂಟೆಗಳ ಸಮಯವನ್ನು ಯೋಗ, ಧ್ಯಾನ ಮತ್ತು ಜಪಗಳಿಗಾಗಿ ಮೀಸಲಿಡುತ್ತಾರೆ.

ಆರ್.ಜೆ.ಮಂಜು ಅವರು ಇದುವರೆಗೂ ನೂರಕ್ಕು ಅಧಿಕ ಕಾರ್ಯಕ್ರಮಗಳ ನಿರೂಪಣೆ ಮಾಡುವ ಮೂಲಕ ಶತಕ ಕಾರ್ಯಕ್ರಮಗಳ ನಿರೂಪಕ ಎಂದು ಹೆಸರು ಪಡೆದಿದ್ದಾರೆ. ಕಲಬುರಗಿಯ ಡಾ.ಎಸ್.ಎಮ್.ಪಂಡಿತ್ ರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸತತ 10 ಗಂಟೆಗಳ ಕಾಲ ವೇದಿಕೆಯ ಮೇಲೆ ನಿಂತು ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಆರ್ ಜೆ ಮಂಜು ಅಭಿನಯಿಸಿರುವ ಧಾರಾವಾಹಿಗಳು

 ಸೈಯದ್ ಅಶ್ರಫ್ ನಿರ್ಧೇಶನದಕಣ್ಣಾ ಮುಚ್ಚಾಲೆ, ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಔಟ್ ಹೌಸ್", ಎಸ್.ಕೆ.ಭಗವಾನ್ ನಿರ್ದೇಶನದಮುಂಜಾನೆ, ಬಸವರಾಜ ನಂದಿಧ್ವಜ ನಿರ್ದೇಶನದಹೂವೊಂದು ಮುಳ್ಳೆರಡುಪ್ರಮುಖವಾದವುಗಳು.

ಆರ್ಜೆ ಮಂಜು ಅವರಿಗೆ ಲಭಿಸಿರುವ ಸನ್ಮಾನ ಮತ್ತು ಪ್ರಶಸ್ತಿಗಳು: 2007- ಜಿ-ಸಿಟಿ ಚಾನೆಲ್ ವರ್ಷದ ಅತ್ತ್ಯುತ್ತಮ ವಾರ್ತಾ ವಾಚಕ ಪ್ರಶಸ್ತಿ, 2015- ಚೆಟ್ಟಿನಾಡ ಸಿಮೆಂಟ್ಸ್, ಕಲಬುರಗಿ ಸಿಮೆಂಟ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಶ್ರೀಶೈಲ ಜಗದ್ಗುರುಗಳಿಂದ ಸನ್ಮಾನ, 2016- ಏಸಿಸಿ ಸಿಮೆಂಟ್ಸ್, ಬ್ರುಂದಾವನ ಸೇವಾ ಸಂಘದಿಂದಬೆಸ್ಟ್ ಸರ್ವಿಸ್ ಟುವಡ್ರ್ಸ ಸೊಸೈಟಿಪ್ರಶಸ್ತಿ ಮತ್ತು ಸನ್ಮಾನ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ವತಿಯಿಂದ ಟಿವಿ ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕಾಗಿಕುಶಾಗ್ರಮತಿ ಖರ್ಗೆಪ್ರಶಸ್ತಿ, 2020- ಸೇವಾ ರತ್ನ ಪ್ರಶಸ್ತಿಗಳು ಸೇರಿದಂತೆ ಇತರೆ ಹಲವು ಗೌರವಗಳನ್ನು ಪಡೆದಿದ್ದಾರೆ.

ಆರ್ ಜೆ ಮಂಜು ನಿರೂಪಿಸಿರುವ ಶತಕಕ್ಕೂ ಹೆಚ್ಚು ಕಾರ್ಯಕ್ರಮಗಳ ಪೈಕಿ ಕೆಲವು ಪ್ರಮುಖ ಕಾರ್ಯಕ್ರಮಗಳು: 

2007- ಡಾನ್ಸ-ಡಾನ್ಸ್ ಫಿನಾಲೆ

2011-“ಭೂಮಾತಾ ರಸಗೊಬ್ಬರಹೊಸ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮ

2012-ಇಂಜಿನಿಯರ್ಸ್ ಡೇ, 2013-ಮತದಾನ ಜಾಗೃತಿ ಕಾರ್ಯಕ್ರಮ

2015-ನುಪುರ ನೃತ್ಯೋತ್ಸವ, ರಾಷ್ಟ್ರೀಯ ಸುರಕ್ಷತಾ ದಿನಾಚರಣೆ, ಪ್ರಜಾವಾಣಿ ನಗೆ-ಹಬ್ಬ, ಡೆಕ್ಕನ್-ಹೆರಾಲ್ಡ್ ಸಿಈಟಿ ಕಾರ್ಯಕ್ರಮ, ಯಾದಗಿರಿ ರಾಜಪೂತ ಸಮಾವೇಶ, ಮೈನ್ಸ್ ಸೇಫ್ಟಿ ಅಸೋಸಿಯೇಶನ್ ಕಾರ್ಯಕ್ರಮ, ಗಣಿ ಪರಿಸರ ಕಾರ್ಯಕ್ರಮ

2016-ನ್ಯಾಷನಲ್ ಸೇಫ್ಟಿ ಡೇ, ಝೀ ಕನ್ನಡ ಸಾ.ರೆ... ಸೀಸನ್-11 ವಿಜೇತರ ಬ್ಲೈಂಡ್ ಫೆಸ್ಟ್-2016, ಕಾಮಿಡಿ ನೈಟ್ ಶೋ ವಿಥ್ ಹಾಸ್ಯ ಕಲಾವಿದ ಪ್ರಶಾಂತ್ ಚೌಧರಿ. ಜಬರ್ದಸ್ತ್ ದಾಂಡಿಯಾ ನೈಟ್ ಸೀಸನ್-01, 

2017-“ಕೆ ಮಾರ್ಟಬಿಗ್ ಬಜಾರ್ ಗ್ರ್ಯಾಂಡ್ ಓಪನಿಂಗ್, ಪೋಲಿಸ್ ಬೀಟ್ ಸಿಸ್ಟಮ್ ಉಧ್ಘಾಟನಾ ಸಮಾರಂಭ, ಸಿಂಗಾಪೂರ್ ಟ್ರಿಪ್ ಲಕಿ ಡ್ರಾ (ಸಮಾಜ ಕಲ್ಯಾಣ ಇಲಾಖೆ), ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ, ನೀರು ಶುಧ್ಧೀಕರಣ ಘಟಕದ ಉಧ್ಘಾಟನಾ ಸಮಾರಂಭ, “ಹಾಯ್ ಪಾಯಿಂಟ್ ಕರ್ನಾಟಕಕನ್ನಡ ಮಾಸ ಪತ್ರಿಕೆಯ ಉಧ್ಘಟನಾ ಸಮಾರಂಭ,

2018-ರಾಜಲಕ್ಷ್ಮೀ ಚಿತ್ರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ತುಮಕೂರು ಶ್ರೀ ಸಿಧ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಜೀಯವರ ಜನ್ಮದಿನದ ಕಾರ್ಯಕ್ರಮ, ಡಾ.ಬಿ.ಆರ್.ಅಂಬೇಡ್ಕರ್ ಅವರ 124ನೇಯ ಜಯಂತ್ಯೋತ್ಸವ ಕಾರ್ಯಕ್ರಮ,

2019-ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ರೈತ ಹಬ್ಬ, ಝೀ ಕನ್ನಡ ವಾಹಿನಿಯ ಕಮಲಿ ಧಾರಾವಾಹಿ ನಟಿ ಅಮೂಲ್ಯ ಅವರ ಜನಪದ ಜಾತ್ರೆ ಕಾರ್ಯಕ್ರಮ, ಕರ್ನಾಟಕ ಸರಕಾರದ ನಗರಾಭಿವೃಧ್ಧಿ ಪ್ರಾಧಿಕಾರದ ಸಚಿವರ ಜನ ಸ್ಪಂದನ ಕಾರ್ಯಕ್ರಮ, “ಗೌಡರ ಗದ್ದಲನಾಟಕ ಪ್ರದರ್ಶನ, ಝೀ ಕನ್ನಡ ವಾಹಿನಿಯ ಪಾರು ಧಾರಾವಾಹಿ ನಟಿ ಮೋಕ್ಷಿತಾ ಕಾರ್ಯಕ್ರಮ, ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್.ಧರಮಸಿಂಗ್ ಪಿಯು ಕಾಲೇಜ್ ಉಧ್ಘಟನಾ ಸಮಾರಂಭ, ಮಜಾ ಭಾರತ ತಂಡದ ನಗೆ ಹಬ್ಬ ಕಾರ್ಯಕ್ರಮ, ಕ್ರಿಸ್ಟ್ಲ್ ಪಾಮ್ ಹೈವೇ ರೆಸಾರ್ಟ ನ್ಯೂ ಇಯರ್ ಪಾರ್ಟಿ,

2020-ಯಶೋರಥ ಸಿನಿಮಾ ಆಡಿಷನ್ ಮತ್ತು ಟೈಟಲ್ ಲಾಂಚ್ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಸಂಕಿರಣ ಕಾರ್ಯಕ್ರಮ, ಟಾಟಾ ಮೋಟಾರ್ಸ್ ಹೊಸ ಶೋರೂಮ್ ಉಧ್ಘಾಟನಾ ಸಮಾರಂಭ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

ಮಾಧ್ಯಮ ಮತ್ತು ಕಿರುತೆರೆ ಎಂಬ ಸಾಗರದಲ್ಲಿ ಭಾಗಶಃ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯ ಅಗಾಧತೆಯನ್ನು ಅನಾವರಣಗೊಳಿಸಿರುವ ಆರ್ಜೆ ಮಂಜು ಹಿರೋಳಿ ಅವರಿಗೆ ಇಂದು (ಅಕ್ಟೋಬರ್ 10) ಹುಟ್ಟುಹಬ್ಬದ ಸಂಭ್ರಮ. ಇವರ ಕೈಂಕರ್ಯ ಇದೇ ರೀತಿಯಲ್ಲಿ ಸಾಗಲಿ. ಯಶಸ್ಸು ಇವರ ಜೊತೆಯಲ್ಲಿಯೇ ಇರಲಿ. ಬರುವ ದಿನಗಳಲ್ಲಿ ಕಿರುತೆರೆಯಲ್ಲಿ ಭವ್ಯವಾಗಿ ವಿಜೃಂಭಿಸಲಿ. ಕಲ್ಯಾಣ ಕರ್ನಾಟಕದ ಕೀರ್ತಿ ಪತಾಕೆಯನ್ನು ಸಂಪೂರ್ಣ ಕರ್ನಾಟಕದ ತುಂಬೆಲ್ಲ ಹಾರಾಡಿಸಲಿ ಎಂದು ತುಂಬು ಹೃದಯದಿಂದ ಶುಭಕೋರುವ.

3 ಕಾಮೆಂಟ್‌ಗಳು: